10.4.08

ಉಗ್ರಗಾಮಿಗಳು

ತಿದಿಯೊತ್ತುವಾಗ ಭಗ್ಗನೇ
ಉರಿದೇಳುವ ಬೆಂಕಿಚೆಂಡು
ಗುರಿ ಉಡಾಯಿಸಲು
ನುಗ್ಗುವ ಕ್ಷಿಪಣಿಯಂತೆ
ಬೆದರಿಸುತ್ತಾರೆ ಭಯೋತ್ಪಾದಕರು
ಸದಾ ಸಿಡಿಗುಂಡು
ಮುಂದಿರುವುದೇನು?
ಯಾಕೆ ಈ ಪಾಪ?
ಪಾಪ, ಮಗುವಲ್ಲವೇ ಬಿಟ್ಟುಬಿಡೋಣ..
ಊಹೂಂ....
ಯಾವುದೇ ಪರಿವೆ ಇಲ್ಲ
ಎಕೆ ೪೭ರ ಕುದುರೆ ಮೀಟಿ
ಆರ್ಭಟಿಸುವುದೇ ಹವ್ಯಾಸ
ಆಜ್ಞಾಧಾರಕ ರೋಬೋಟ್‌ಗಳಂತೆ
ಜೀನುಕಟ್ಟಿದ ಕುದುರೆಗಳಂತೆ
ಸ್ವರ್ಗ ಕೆಡವಿ ಸದಾ ರೌರವ ನರಕ
ಸೃಷ್ಟಿಯೇ ಗುರಿ
ಅರಳಿದ ಸುಂದರ ಹೂಗಳ ಸಂಹಾರ
ಕಾರ್ಯಕ್ಕೆ ಇವರದೇ ಪೌರೋಹಿತ್ಯ

1 comment:

ಸುಪ್ತದೀಪ್ತಿ suptadeepti said...

ನಕ್ಸಲರ ಬೇಟೆಯಲ್ಲಿ ಬಿದ್ದಿದ್ದೀಯಾ? ಕವನ ಚೆನ್ನಾಗಿದೆ.

Related Posts Plugin for WordPress, Blogger...