25.3.09

ಒಂದಷ್ಟು ಅರಿಕೆ...

ನಿನ್ನ ಖುಷಿಯ

ಅಲೆಗಳಲ್ಲಿ ನನ್ನ ನೋವುಗಳೆಲ್ಲ

ಕೊಚ್ಚಿಕೊಂಡು ಹೋಗಲಿ

ನಿನ್ನ ನಾಳೆಗಳಲ್ಲಿ

ನನ್ನ ಇಂದು

ಪಿಳಿ ಪಿಳಿ

ಕಣ್ಣು ಬಿಡಲಿ

ಕ್ಷಣಕ್ಷಣಕ್ಕೂ ಬದಲಾಗುವ

ನಿನ್ನ ಮಾತಿನ ಮೋಡಿಯಲ್ಲಿ

ಸಿಲುಕಿದ ನನ್ನ ಹಾಡುಗಳೆಂದಿಗೂ

ಮಾಧುರ್ಯ ಕಳೆದುಕೊಳ್ಳದಿರಲಿ

ದಿನರಾತ್ರಿ ಕನಸುಕಾಣುವ

ನಿನ್ನ ಕಂಗಳ ರೆಪ್ಪೆಗಳು

ನನ್ನೆದೆಯ ಕ್ಯಾನ್ವಾಸಲ್ಲಿ

ಚಿತ್ತಾರ ಬರೆಯಲಿ..

ನಮ್ಮ ಅಗಲುವಿಕೆಯ

ಬೇಗುದಿಯೆ ಈ ಛಳಿಗೆ

ಹೊದಿಕೆಯಾಗಲಿ..

11 comments:

shivu.k said...

ವೇಣು ಆನಂದ್,

ಮತ್ತೊಬ್ಬರ ಸಂತೋಷದಲ್ಲಿ ನಿಮ್ಮ ನೋವುಗಳನ್ನು ಮರೆಯುವ ಪ್ರಯತ್ನದಲ್ಲಿ ಕವನ ತುಂಬಾ ಚೆನ್ನಾಗಿದೆ...

ಹರೀಶ ಮಾಂಬಾಡಿ said...
This comment has been removed by the author.
ಹರೀಶ ಮಾಂಬಾಡಿ said...

:)

PARAANJAPE K.N. said...

ವೇಣುವಿನೋದ್,
ಕವನ ಚೆನ್ನಾಗಿದೆ.,

ಶಾಂತಲಾ ಭಂಡಿ (ಸನ್ನಿಧಿ) said...

ವೇಣು ವಿನೋದ್ ಅವರೆ...

"ನಿನ್ನ ನಾಳೆಗಳಲ್ಲಿ

ನನ್ನ ಇಂದು

ಪಿಳಿ ಪಿಳಿ

ಕಣ್ಣು ಬಿಡಲಿ "

ಈ ಸಾಲು ಇನ್ನಷ್ಟು ಇಷ್ಟವಾಯಿತು.
ಚೆಂದ ಕವನ ಯಾವತ್ತಿನಂತೆ. ಬರೆಯುತ್ತಿರಿ.

ಸಾಗರದಾಚೆಯ ಇಂಚರ said...

ವೇಣು,
ತುಂಬಾ ಸುಂದರ ಕವನ,
ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು.

lancyad said...

ಕವನ ಚೆನ್ನಾಗಿತ್ತು.ತಡವಾಗಿ ಕಮೆ0ಟ್ ಮಾಡಿದಕ್ಕೆ ವಿಷಾದ... ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆ ಯುಗಾದಿಯ ಹಾರ್ದಿಕ ಶುಭಾಶಯಗಳು.

ಧರಿತ್ರಿ said...

ಎಷ್ಟು ಚೆನ್ನಾಗಿ ಕವನ ಬರೀತೀರಿ..(:)
-ಧರಿತ್ರಿ

ಮಿಥುನ ಕೊಡೆತ್ತೂರು said...

ವಾಹ್

VENU VINOD said...

Shivu, mambady,paranjape, shantala, guru, lancy, dharitri matthu mithunge thanks... :)

ಉಷಾ... said...

ನಮ್ಮ ಅಗಲುವಿಕೆಯ ಬೇಗುದಿಯೆ ಈ ಛಳಿಗೆ ಹೊದಿಕೆಯಾಗಲಿ..

V nice...

Related Posts Plugin for WordPress, Blogger...