13.7.14

ಭಾನುವಾರದ ಲಹರಿಯಲ್ಲಿ....

ಸಿಕ್ಕಿದಂತೆಯೇ ಆಗುವ
ಆದರೆ ಮುಷ್ಟಿಯಲ್ಲಿ ನಿಲ್ಲದ 
ನೀರಿನಂತೆ ಹರಿದು ಹೋಗುವ
ಓ ನಲ್ಮೆಯ ಕ್ಷಣವೇ
ನನಗೆ ನೀನು ಒಗಟು

ಎಲ್ಲ ಇದ್ದು ಏನೂ
ಇಲ್ಲದ ಭಾವ ತರುವ
ಭಾರ ಹೃದಯ, ಆರ್ದೃ ಕಂಗಳ
ಕಾಡುವ ಓ ಮನವೇ 
ನಿನಗೆ ನಾನು ಕೃತಜ್ಞ

ನಗರದೆಲ್ಲೆಡೆ ದೀಪಗಳು
ಝಗಮಗಿಸಿದರೂ 
ನನ್ನ ಕಣ್ಣ ಕೋಣೆಯಲ್ಲಿ 
ಇನ್ನೂ ನೆಲೆಸಿರುವ 
ಓ ಕತ್ತಲೆಯೇ 
ನಾನು ನಿನ್ನಿಂದ ಧನ್ಯ

ಇನ್ನಿಲ್ಲದ ಒತ್ತಡದಲ್ಲೂ
ನನ್ನ ಬೆರಳ ತುದಿಗೆ
ಹರಿದು ಬಂದು ಭಾವದಲೆಯಲ್ಲಿ
ನಲಿದಾಡಿಸುವ
ನಾಲ್ಕು ಅಕ್ಷರಗಳೇ
ನಿಮಗೆ ನಾನು ಚಿರಋಣಿ
Related Posts Plugin for WordPress, Blogger...