4.8.11

ರಾಜ ಬೇಕಾಗಿದ್ದಾನೆ!

 ನಾವು ಶಾಂತಿಪ್ರಿಯ
ರಾಜ್ಯದ ನತದೃಷ್ಟ ಪ್ರಜೆಗಳು
ಬಂದ ರಾಜರೆಲ್ಲ
ರಾಜ್ಯ ಲೂಟಿಕೊಟ್ಟು
ಹೋಗಿದ್ದಾರೆ.
ರಾಜ್ಯದ ಬೊಕ್ಕಸದಲ್ಲಿ
ತಮ್ಮ ಮಹಲು ಕಟ್ಟಿಕೊಂಡಿದ್ದಾರೆ
ನಮ್ಮವರೇ ನಮಗೆ
ಚೂರಿ ಹಾಕಿದ್ದಾರೆ,
ಸಿಂಹಾಸನವನ್ನೂ ಬಿಡದೆ
ಬಾಚಿದ್ದಾರೆ

ನಮ್ಮನ್ನು ರಕ್ಷಿಸಲು
ರಾಜ ಬೇಕಾಗಿದ್ದಾನೆ
ನಮಗೊಬ್ಬ...



ರಾಜನೆಂದರೆ ರಾಜ...
ಪ್ರಜೆಗಳನ್ನು ಪೀಡಿಸುವ
ಗುಲಾಮರಂತೆ
ಕಾಡುವ ದಳಪತಿಯಲ್ಲ,
ಆಡಳಿತದ ಗಂಧಗಾಳಿಯರಿಯದೆ
ಬರೀ ಭಾಷಣ ಬಿಗಿಯುವ
ರಾಜವಂಶದ ಕುಡಿಯಲ್ಲ
ಲೂಟಿಕೋರರೇ
ಕಳುಹಿಸಿಕೊಟ್ಟ ಬೂಟಾಟಿಕೆಯವನಲ್ಲ

ಭೋಜರಾಜನಂತೆ
ರಾಜ್ಯ ಸುತ್ತಿ
ಪ್ರಜೆಗಳ ಕಷ್ಟ ತಿಳಿಯುವವ ರಾಜ
ನಮ್ಮನ್ನು ಮಕ್ಕಳಂತೆ
ಸಲಹುವ ಕಾಶಿರಾಜನಂತಹ ರಾಜ
ರಾಮನ ಪಾದುಕೆಯನ್ನೇ
ಸಿಂಹಾಸನದಲ್ಲಿರಿಸಿಯೂ
ರಾಜ್ಯವಾಳಬಲ್ಲ ಸರಳ
ರಾಜನೊಬ್ಬ ಬೇಕಾಗಿದ್ದಾನೆ
ನಮಗೊಬ್ಬ.

ನಮ್ಮ ಮಣ್ಣಲ್ಲಿ ಬೆಳೆದವನಾಗಿರಬೇಕು
ನಮ್ಮ ಕಷ್ಟಗಳ ಅರಿತಿರಬೇಕು
ಅರವತ್ತು ವಿದ್ಯಾ ಪಾರಂಗತನಾಗಿರಬೇಕು
ಲೂಟಿಕೋರರ ಹುಟ್ಟಡಗಿಸಬೇಕು

ಅಂತಹ ರಾಜನಿದ್ದರೆ
ಹೇಳಿ ನಾವೇ
ಪಟ್ಟಕ್ಕೇರಿಸುತ್ತೇವೆ

ಕಷ್ಟವೋ ಸುಖವೋ
ಇನ್ನೊಮ್ಮೆ ನೋಡಿಬಿಡುತ್ತೇವೆ!

7 comments:

Naveen Ammembala said...

ನಿಜಕ್ಕೂ ಚೆನ್ನಾಗಿದೆ.. ಪೊರ್ಲು ಉಂಡು. ಈರೆನ ಆಶಯ ನಿಜ ಆವಡ್..

Unknown said...

chennagide

Girish K.N. said...

sooper!!.. apt for the current situation.. superlike

sunaath said...

ನಮ್ಮ ಪುಣ್ಯಬಲವಿದ್ದರೆ, ಇಂತಹ ರಾಜ ನಮಗೆ ಸಿಕ್ಕಾನು!

lancyad said...

ನಿಜಕ್ಕೂ ರಾಜ ಬೇಕಾಗಿದ್ದಾನೆ. ಅವನೊಂದಿಗೆ ಒಳ್ಳೆಯ ಭಟರು ಬೇಕಾಗಿದ್ದಾರೆ....

ಹರೀಶ ಮಾಂಬಾಡಿ said...

sakalika

kumar-ravi@live.com said...

we chosen him
called king
we offerd him
boxing ring

pennyless poor people
wish prosperity
black collared hench men
smash prosperity

whats going on..
to whom we are blaming....

Related Posts Plugin for WordPress, Blogger...