22.2.08

ನೀವೂ ಬನ್ನಿ ಕಾಡಿಗೆ....

ಪ್ರಕೃತಿ...ಕವಿ...ಚಾರಣಿಗ....ಕಲಾವಿದ....ಇವರೆಲ್ಲರ ನಡುವೆ ಅದೇಕೋ ಕೆಮಿಸ್ಟ್ರಿ ಬಹಳಷ್ಟು ಮ್ಯಾಚ್ ಆಗುತ್ತೆ...
ಅದಕ್ಕೇ ಎಲ್ಲರಿಗೂ ಬಹುಷಃ ನಿಸರ್ಗ ಎಂದರೆ ಅಚ್ಚುಮೆಚ್ಚು.
ಹೀಗೆಯೇ ಇರುವ ನಿಸರ್ಗಪ್ರೇಮಿಗಳಲ್ಲಿ ಒಬ್ಬರು ಹೊಳ್ಳ.
ಸಪುರ ದೇಹದ ದಿನೇಶ ಹೊಳ್ಳರ ತಲೆಯಲ್ಲಿ ಅದೇನೇನು ಐಡಿಯಾಗಳು ಹೊಳೆಯುತ್ತವೋ ದೇವರೇ ಬಲ್ಲ. ವೃತ್ತಿಯಲ್ಲಿ ಗ್ರಾಫಿಕ್ ಕಲಾವಿದರಾದ ಹೊಳ್ಳ, ಪ್ರವೃತ್ತಿಯಲ್ಲಿ ಚಾರಣಿಗ, ನಿಸರ್ಗಪ್ರೇಮಿ, ಕವಿ, ಕಥೆಗಾರ. ಪ್ರಮುಖ ಪತ್ರಿಕೆಗಳಲ್ಲಿ ಇವರ ಕಥೆ ಕವನ ಪ್ರಕಟವಾಗುತ್ತಲೇ ಇದೆ. ಅದೇ ರೀತಿ ತಮ್ಮದೇ ಶೈಲಿಯ ಅರ್ಥಪೂರ್ಣ ಚಿತ್ರಗಳನ್ನು ರಚಿಸುತ್ತಾರೆ. ಮಂಗಳೂರಿಗೆ ಗಾಳಿಪಟ ಹಾರಾಟದಲ್ಲಿ ಹೆಸರು ತಂದುಕೊಟ್ಟ ಟೀಂ ಮಂಗಳೂರಿನ ಪ್ರಮುಖ ಗಾಳಿಪಟದ ವಿನ್ಯಾಸಗಾರರೂ ಹೌದು.
ಕಳೆದ ಎರಡು ವರ್ಷಗಳಿಂದ ಇವರು ವೈವಿಧ್ಯಮಯ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿದ್ದಾರೆ. ಮೊದಲ ಬಾರಿಯ ಪ್ರಯತ್ನದಲ್ಲಿ ಸುಬ್ರಹ್ಮಣ್ಯ ಬಳಿಯ ಯಸಳೂರು ರಕ್ಷಿತಾರಣ್ಯದಲ್ಲಿ ಕಲಾವಿದರಿಗೆ ಚಿತ್ರ ಬಿಡಿಸಲು ಕವಿಗಳಿಗೆ ಭಾವನೆಗಳಿಗೆ ಅಕ್ಷರ ರೂಪ ಕೊಡಲು ಅವಕಾಶ ಕೊಟ್ಟರು. ಮಧ್ಯೆ ತಮ್ಮ ‘ಅಡವಿಯ ನಡುವೆ’ ಅನ್ವರ್ಥನಾಮದ ಕವನ ಸಂಕಲನವನ್ನೂ ಬಿಡುಗಡೆ ಮಾಡಿದರು ಹೊಳ್ಳ. ಆ ಹಚ್ಚಹಸಿರು ಕಲಾವಿದರ ಕುಂಚಕ್ಕೆ ಹೊಸಸ್ಪೂರ್ತಿ ಕೊಟ್ಟರೆ, ಕವಿಗಳ ಭಾವನೆ ಅರಳಿಸಿತು. ಇದು ಆಗಿದ್ದು ೨೦೦೬ರಲ್ಲಿ.
ಆ ಬಳಿಕ ಹೊಳ್ಳರಿಗೆ ಹುರುಪು ಕಡಮೆಯಾಗಿಲ್ಲ. ಕಳೆದ ವರ್ಷ ಮಂಗಳೂರು ಸಮೀಪದ ತಣ್ಣೀರುಬಾವಿ ಕಡಲತೀರದಲ್ಲಿ ವರ್ಣಶರಧಿ ಎಂಬ ಜಂಬೋ ಕಾರ್ಯಕ್ರಮ ಏರ್ಪಡಿಸಿಬಿಟ್ಟರು. ಇಲ್ಲೂ ಕವಿಗಳಿದ್ದರು, ಕಲಾವಿದರೂ ಇದ್ದವು, ಜತೆಗೆ ಹಾಡುಗಾರರು ಹಾಡಿದರು, ನಗೆಮಲ್ಲರು ಬಂದು ನಗಿಸಿದರು ಎಲ್ಲವೂ ಕಡಲತಡಿಯ ಮರಳ ಹಾಸಿಗೆಯಲ್ಲಿ, ಗಾಳಿಮರದ ನೆರಳಲ್ಲಿ.
ಈ ಬಾರಿ ಅಂಥದ್ದೇ ಮತ್ತೊಂದು ಪ್ರಯತ್ನ ಅವರಿಂದ. ಈ ಬಾರಿ ಅವರೊಂದಿಗೆ ವನ್ಯಚಾರಣ ಬಳಗದ ಮಿತ್ರರಾದ ರಮೇಶ ಕಾಮತ್, ಸುಧೀರ್‍, ಸುನಿಲ್, ವಿನಯ್, ಪ್ರವೀಣ್ ಮುಂತಾದವರೂ ಕೈ ಜೋಡಿಸಿದ್ದಾರೆ.
ಮಂಗಳೂರಿಂದ ಹೆಚ್ಚೇನೂ ದೂರ ಇಲ್ಲದ ಇನೋಳಿ ಪಾವೂರು ಎಂಬಲ್ಲಿ ದೇವಂದಬೆಟ್ಟದಲ್ಲಿ ಕವಿಗಳನ್ನು, ಕಲಾವಿದರನ್ನು ಸೇರಿಸುತ್ತಿದ್ದಾರೆ, ಕಾರ್ಯಕ್ರಮಕ್ಕೆ ಭಾವಸಂಚಯ ಎಂಬ ಚೆಂದದ ಹೆಸರೂ ಕೊಡಲಾಗಿದೆ.
ಫೆ.24ರಂದು ಬೆಳಗ್ಗೆಯಿಂದ ಸಂಜೆ ತನಕ ದೇವಂದ ಬೆಟ್ಟದಲ್ಲಿ ೨೨ ಕವಿಗಳೂ ೨೨ ಕಲಾವಿದರೂ ಸೇರಿ ಭಾವಸಂಚಯಕ್ಕೆ ರೂಪುಕೊಡಲಿದ್ದಾರೆ.
ಉಡುಪಿಯ ಖ್ಯಾತ ಹಾಸ್ಯಸಾಹಿತಿ ಕು.ಗೋ ಅವರಿಂದ ನಗೆಯೂಟ ಇದೆ. ಕಾರ್ಯಕ್ರಮಕ್ಕೆ ಬರಲು ಆಸಕ್ತಿ ಇದ್ದರೆ ಮಂಗಳೂರು ಯೂತ್‌ ಹಾಸ್ಟೆಲ್‌ನಿಂದ ಬೆಳಗ್ಗೆ 8ಕ್ಕೆ ಬಸ್ ವ್ಯವಸ್ಥೆ ಕೂಡಾ ಇದೆ. ಹೊಳ್ಳರೊಂದಿಗೆ ಮಾತನಾಡಬೇಕಾದರೆ 9341116111ಗೆ ಕರೆಮಾಡಬಹುದು. ಇಂಥ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹೊಳ್ಳರಂಥವರು ಆಯೋಜಿಸುತ್ತಲೇ ಇರಲಿ!

4 comments:

ವಿಕ್ರಮ ಹತ್ವಾರ said...

This is Wonderful!!

Feb-24. Short notice :)

nanage hegidru barokkaagolla :(

Have good time there..

ರಾಧಾಕೃಷ್ಣ ಆನೆಗುಂಡಿ. said...

ಮಂಗಳೂರು ಬಿಟ್ಟ ಮೇಲೆ ಹೀಗೆಲ್ಲಾ ಆಯಿತಲ್ಲಾ ಎಂದು ವರಿ ಮಾಡುವಂತಾಗಿದೆ.

ರಾಜೇಶ್ ನಾಯ್ಕ said...

ಸಾಟಿಯಿಲ್ಲದ ಹೊಳ್ಳ!

Madhu said...

ಇದು ಹುಡುಕು ನೋಡಿ
http://www.yanthram.com/kn/

Related Posts Plugin for WordPress, Blogger...